ವಿರಹದೂರಿಗೆ ನಿನ್ನ ಹೆಸರಿಡಲೇ
ಯಾವುದೇ ಸುಂಕವಿಲ್ಲ, ರಹದಾರಿ ಬೇಕಿಲ್ಲ
ಕಾದಿರುವೆ ದಾರಿಯುದ್ದಕ್ಕೂ ಹೂವ ಚೆಲ್ಲಿ
ಸಂಜೆ ರಂಗೇರುವ ಹೊತ್ತಾಯಿತು
ಮನಸ್ಸಿಗೆ ಏಕಾಂತ ಸಾಕಾಯಿತು..
ಇನ್ನೆಷ್ಟು ದಿನ ಈ ವಿರಹದ ಬೇಗೆ
ಕವಲೊಡೆದ ಅವನಿಯಂತಾಗಿದೆ ಮನ
ಪನ್ನೀರು ಅಲ್ಲದಿದ್ದರೂ, ನೀರನ್ನಾದರೂ ಸುರಿಯುವೆಯಾ
ಹೃದಯದ ಡೇರೆಯಲ್ಲಿ ಮತ್ತೆ "ಹೂ" ಬಿಡಬಹುದು...!
Comments
Post a Comment