ಆತ್ಮ ಶುದ್ಧಿ
ಒಡೆದಿರುವೆ ಅಮೂಲ್ಯವಾದ ಕನ್ನಡಿಯ ಕೈಯ್ಯಾರೆ
ಅಂಟಿಸಲೇಬೇಕಿದೆ ಈ ಮಾಯಾ ದರ್ಪಣ
ಇರದಿದ್ದರೆ ನನ್ನೀ ಆತ್ಮಕ್ಕೆ ಬಿಡಬೇಕಿದೆ ತರ್ಪಣ
ಗಾಜಿನ ತುಂಡುಗಳನ್ನು ಹೆಕ್ಕುವಾಗ ರಕ್ತ ಸೋರುತಿಹುದು
ಬೆರಳುಗಳ ನೋವೇ ಇಷ್ಟಿರುವಾಗ ಅವಳ ಮನಸ್ಸಿನ ಯಾತನೆ ಇನ್ನೆಷ್ಟಿರಬೇಡ
ಸ್ವಚ್ಛ ಮಾಡಬೇಕಿದೆ ರಾಡಿಯಾದ ನೆಲವ
ಜೋಡಿಸಲೇಬೇಕಿದೆ ಅವಳ ಹೃದಯವ
ಸಾವೇ ಬಂದರೂ ಬಿಡೆನು ಈ ಪ್ರಯತ್ನವ
ಶುರುವಿನಿಂದ ಜೀವಿಸಬೇಕು, ಮೊದಲಿನಿಂದ ಪ್ರೇಮಿಸಬೇಕು.
ಮಹಾ ಮಳೆಗೆ ಬಿದ್ದ ಮರದ ಟೊಂಗೆಯಿಂದ ಎಲೆ ಚಿಗುರಿದಂತೆ..!
Comments
Post a Comment